ಶುಕ್ರವಾರ, ಜೂನ್ 6, 2014

ರಾಮ ರಾಜ್ಯದಲ್ಲಿ ಸೀತೆಗೂ ನ್ಯಾಯ ಸಿಗಲಿ - ಮೋದಿ ಯವರಿಗೊಂದು ಬಹಿರಂಗ ಪತ್ರ
'ಮೇ , ನರೇಂದ್ರ ದಾಮೋದರ ಮೋದಿ' ಎಂದು ನಿಮ್ಮ ಕಂಚಿನ ಕಂಠ ದೆಹಲಿಯ ರಾಷ್ಟ್ರ ಪತಿ ಭವನದಲಿ ಮೊಳಗುತ್ತಿದ್ದಂತೆ ,ಕೋಟ್ಯಂತರ ಭಾರತೀಯರ ಕನಸು ನನಸಾಯಿತು . ಅತ್ಯಂತ ನೀಚ , ಅಧೋಗತಿಗಿಲಿದಿರುವ ರಾಜಕೀಯ ಅನೈತಿಕತೆಯ ದಿನಗಳಲ್ಲಿ , ಕೆಸರಿನಿಂದ ಕಮಲದಂತೆ ಉದ್ಭವ ವಾದಂತೆ ತೋರುತ್ತಿತ್ತು . ಈಗಿನ ಅಪ್ರತ್ಯಕ್ಷ ಪರಕೀಯ ರಾಜಕೀಯ ಕಿಂತ , ನೇರ ಪರಕೀಯ ಬ್ರಿಟಿಷ್ ಆಡಳಿತವೇ ಸರಿಯಿತ್ತೇನೋ ಅನ್ನುತ್ತಿರುವಾಗಲೇ , ಭಾರತೀಯರಿಗೆ ಅಶಾಕಿರನವೊಂದು ಗೋಚರಿಸಿದೆ . ಅಧರ್ಮ ತಳ ಮಟ್ಟಕಿಳಿದಾಗ , ಯುಗೇ ಯುಗೇ ಎಂದು ದೇವರು ಹುಟ್ಟುತ್ತನೂ , ಇಲ್ಲವೋ , ಭಾರತೀಯರಿಗೆ ಆಗಾಗ ಸುಭಾಷ್ ಚಂದ್ರ ಭೋಸ್ , ಮೋಹನದಾಸ ಕರಮಚಂದ್ರ ಗಾಂಧಿ ಯಂಥವರು, ವಲ್ಲಭ ಬಾಯಿ ಪಟೇಲ್ ಮತ್ತು ನಿಮ್ಮಂಥವರು ಹುಟ್ಟಿ ಬರುತ್ತಿರುವುದು ಭಾರತೀಯರ ಸೌಭಾಗ್ಯ ಎಂದೇ ಹೇಳಬಹುದು
ಪ್ರಧಾನಿಯಾದ ದಿನದಿಂದ ನೀವು ತೆಗೆದುಕೊಳ್ಳುತ್ತಿರುವ ನಿರ್ಧಾರಗಳು ಮತ್ತು ಇಡುತ್ತಿರುವ ದಿಟ್ಟ ಹೆಜ್ಜೆಗಳು ರಾಮ ರಾಜ್ಯದ ವೈಭದ ದಿನಗಳು ಹೆಚ್ಚು ದೂರವಿಲ್ಲ ಎನ್ನಿಸುತ್ತಿದೆ. ಅದು ನನಸಾಗುವ ವರೆಗೂ ಆ ದೇವರು ನಿಮಗೆ ಆಯುಷ್ಯ ಅರೋಗ್ಯ ಮತ್ತು ರಾಜಕೀಯ ಶಕ್ತಿ ಯನ್ನು ನೀಡಲಿ ಎಂಬುದು ನಮ್ಮ ಪ್ರಾರ್ಥನೆ .
ಭಾರತದ ರಾಮರಾಜ್ಯ ಕನಸು ನನಸಾಗುತ್ತಿರುವ ಸಂತೋಷ ಒಂದು ಕಡೆಯಾದರೆ , ರಾಮನ ಕಾಲದಲ್ಲಿ ಸೀತೆಗೆ ಆದ ಅನ್ಯಾಯ ಮರಕಳಿಸುತ್ತಿದೆ ಎಂಬ ದುಃಖ ಒಂದುಕಡೆ . ಆ ರಾಮ ಒಬ್ಬ ಪ್ರಜೆಯನ್ನು ಮೆಚ್ಚಿಸುವುದಕೊಸ್ಕರ , ಯ್ಯಾವ ತಪ್ಪು ಮಾಡಿರದ ಸೀತೆಯನ್ನು ವನವಾಸಕ್ಕೆ ದೂಡಿದನಂತೆ . ರಾಮನನ್ನು ಮನಸಾ ಪೂಜಿಸುವ ರಾಮಭಕ್ತ ರಿಗೂ , ಈ ರಾಮನ ನಿರ್ಧಾರವನ್ನು ಜೀರ್ಣಿಸಿ ಕೊಳ್ಳಲು ಕಷ್ಟ . ಒಬ್ಬ ಅಗಸನ ಉಡಾಫೆ ಮಾತು, ಸೀತೆಯ ಕ್ಷೇಮ ಕಿಂತ ಹೆಚ್ಚಾಯಿತೇ ?. ಒಬ್ಬ ಕ್ಷುಲ್ಲಕ ಪ್ರಜೆಯ ಅಭಿಪ್ರಾಯ ಕ್ಕೆ ರಾಮ ಮನ್ನಣೆ ಕೊಡಲು ರಾಮನಿಗೆ ಮನಸಾದರು ಹೇಗೆ ಬಂತು . ಅದೇಲ್ಲ ವಿಧಿ, ನಿರ್ಧಾರಿತ ವಿಚಾರ ವೆಂದರೂ, ಅಂತಹ ಕಟಿನ ಶಿಕ್ಷೆಗೆ ಸೀತೆ ಮಾಡಿದ ತಪ್ಪಾದರೂ ಏನು ? ಸೀತೆಗೆ ಅನ್ಯಾಯ ವಾಗದೆ ರಾಮ ರಾಜ್ಯ ವನ್ನು ಕಟ್ಟುವುದಕ್ಕೆ ಸಾದ್ಯವೇ ಇಲ್ಲವೇ ಎಂಬುವ ಪ್ರಶ್ನೆ ಕಾಡುತ್ತಿದೆ . ರಾಮರಾಜ್ಯ ಸ್ಥಾಪನೆಗೆ ಸೀತೆಯ ಬಲಿದಾನ ಅವಶ್ಯಕವೇ ?
ಇಷ್ಟು ಪೀಟಿಕೆ ಯೊಂದಿಗೆ ಪ್ರಸ್ತುತ ವಿಚಾರಕ್ಕೆ ಬರುತ್ತೇನೆ . ಇಂದಿನ ಸೀತೆ ಮೋದಿಯವರ ಪತ್ನಿ ಯಶೋದ ಬೆನ್. ನೀವು ದೇಶ ಸೇವೆಗೊಸ್ಕ್ರ ರ ಸಂಸಾರವನ್ನು ಬಿಟ್ಟಿದ್ದು ದೊಡ್ಡ ತ್ಯಾಗವೇ ನಿಜ. ನೀವು ಇದುವರಗಿನ ಪ್ರಯಾಣದಲ್ಲಿ ನಿಮ್ಮ ಪತ್ನಿಯ ವಿಚಾರವನ್ನು ಎಲ್ಲೂ ಪ್ರಸ್ತಾಪಿಸಿರಲಿಲ್ಲ . ಅದರ ಅವಶ್ಯಕತೆ ದೇಶದ ಜನರಿಗೂ ಇರಲಿಲ್ಲ. ನೀವು ನಿಮ್ಮ ದಾರಿಗೆ ಕಾನೂನಿನ ತೊಡಕು ಬರಬಾರದೆಂದು ಈ ಬಾರಿ ನಿಮ್ಮ ಪತ್ನಿಯ ಹೆಸರನ್ನು ನಮೋದಿಸಿದ್ದಿರ. ಇದರಿಂದ ನಿಮ್ಮ ಮೇಲಿನ ಜನರ ಗೌರವಕ್ಕೆ , ನಿಮ್ಮ ಯಶಸ್ಸಿಗೆ ಅಡ್ಡಿಯಾಗಿಲ್ಲ. ನೀವು ನಿಮ್ಮ ಪತ್ನಿಯ ಹೆಸರನ್ನು ನಮೂದಿಸಿದಾಗ , ಆ ಹಿರಿಯ ಜೀವಕ್ಕೆ ಎಷ್ಟು ಸಂತೋಷ ವಾಗಿತ್ತೋ ಎನೋ ?.
ಲೋಕ ಕಲ್ಯಾಣಕ್ಕೆ ,ನಿಮ್ಮ ಸಂಸಾರ ತ್ಯಾಗವನ್ನು ಗೌತಮ ಬುದ್ದ ನಿಗೆ ಹೊಲಿಸ ಬಹುದೇನೊ . ಸಿದ್ಧಾರ್ಥ ನೂ ಕೂಡ ಸತ್ಯಾನ್ವೇಷಣೆ ಗೋಸ್ಕರ ತನ್ನ ಪತ್ನಿ ಮತ್ತು ಮಗನನ್ನು ಮಧ್ಯರಾತ್ರಿಯ ತೊರೆದನಂತೆ . ಬೋಧಿ ವೃಕ್ಷ ದ ಕೆಳಗೆ ಜ್ಞಾ ನೋ ದಯವಾದ ನಂತರವೂ ಪತ್ನಿಯ ಯನ್ನು ವಿಚಾರಿಸದೆ , ಲೋಕವನ್ನು ಉದ್ಧರಿಸಲು ಹೊರಟು ನಿಂತನಂತೆ . ಪಾಪ ಗೌತಮನ ಪತ್ನಿಯ ಹೆಸರೂ ಯಶೋದ , ನಿಮ್ಮ ಪತ್ನಿಯ ಹೆಸರೂ ಯಶೋದ . ಎಂಥ ಕಾಕಾ ತಾ ಳಿಯ !
ಆ ಹಿರಿಯ ಜೀವ ನೀವು ನಾಮಪತ್ರದಲ್ಲಿ ಅವರ ಹೆಸರನ್ನು ನಮೂದಿಸಿದಾಗ ಎಷ್ಟು ಸಂತೋಷ ಪಟ್ಟಿತ್ತು . ನೀವು ಪ್ರಧಾನಿ ಯಾಗಲಿ ಎಂದು ಎಷ್ಟೂ ದೇವರಿಗೆ ಹರಕೆ ಹೊತ್ತು , ಹಂಪಿ ಹಾದಿಯಾಗಿ , ದೇಶದ ಮೂಲೆ ಮೂಲೆಗೋ ಹೋಗಿ ಕಂಡ ಕಂಡ ದೇವರನ್ನು ಬೇಡಿಕೊಂಡಿದೆ . ಅಂತಹ ಪತಿವ್ರತೆ ಯನ್ನ ನೀವು ಪ್ರಮಾಣ ವಚನಕ್ಕೆ ಆಮತ್ರಿಸಿದ್ದಾರೆ ಎಷ್ಟೂ ಧನ್ಯವಾಗು ತಿದ್ದರೂ ಏನೂ ?. ಭಾರತದ ವೈರಿ ಪಾಕಿಸ್ತಾನದ ನವಾಜ್ ಶರೀಫ ರನ್ನು ಆಮಂತ್ರಿಸಿದ ನಿಮಗೆ, ತಮ್ಮ ಪತ್ನಿಯನ್ನು ಆಮಂತ್ರಿಸುವ ದೊಡ್ಡತನವನ್ನು ತೋರಬಹುದಿತ್ತು . ತಮಿಳರ ವಿರೋಧವನ್ನೂ ಲಕ್ಕಿಸದೆ ಶ್ರೀಲಂಕಾದ ರಾಜಪಕ್ಷೆ ಯಾನ್ನು ಆಹ್ವಾನಿಸಿದ ನೀವು, ನಿಮ್ಮ ಪತ್ನಿಯನ್ನು ಆಹ್ವಾನಿಸಿದ್ದರೆ ಯ್ಯಾರೂ ವಿರೋದಿಸುತ್ತಿರಲಿಲ್ಲ . ಆ ಗೌರವಕ್ಕೆ ಆ ತಾಯಿ ಅರ್ಹಳೂ ಕೂಡ .
ನೀವು ದೇಶಕೊಸ್ಕರ ನಿಮ್ಮ ಸಂಸಾರವನ್ನು ತ್ಯಾಗ ಮಾಡಿದ್ದಿರಿ . ಅದೇ ಕಾರಣಕ್ಕೆ , ನಿಮ್ಮ ದ್ಯೇಯೂ ದ್ದೆಶಗಳಿಗೆ ಅಡ್ಡಿಯಾಗದೆ , ಅವರೂ ಕೂಡ ನೇರವಾಗಿ ಅಲ್ಲದಿದ್ದರೂ, ಅಪ್ರತ್ಯಕ್ಷವಾಗಿ ನಿಮ್ಮ ಗುರಿ ಸಾದನೆಗೆ ನೆರವಾಗಿದ್ದಾರೆ . ಆ ಮಹಾ ತ್ಯಾಗಕ್ಕೆ , ಭಾರತೀಯ ಸ್ತ್ರೀ ಸಂಸ್ಕೃತಿಗೆ , ನೀವು ಅವರ ಕೊಡುಗೆಯನ್ನು ಗುರುತಿಸಿದ್ದರೆ , ಒಂದು ಮಹಾ ಭಾರತೀಯ ನಾರೀ ಗೌರವ ಸಲ್ಲಿಸಿದ ಹಾಗುತ್ತಿತ್ತು. ಆ ಗೌರವಕ್ಕೆ,ಆ ತಾಯಿ ಇನ್ನೂ ಎಷ್ಟುದಿನ ಕಾಯಬೇಕು ಅಥವಾ ಇನ್ನು ಯ್ಯಾವ ತ್ಯಾಗ ಮಾಡಬೇಕು ಎಂಬುದೇ ಪ್ರಶ್ನೆಯಾಗಿ ಕಾಡುತ್ತಿದೆ
ಆ ವಿಷಯದ ಬಗ್ಗೆ ಯ್ಯಾವ ಪತ್ರಿಕೆಯವರು ಬರೆಯುವುದಿಲ್ಲ. ಏಕೆಂದರೆ ನಿಮ್ಮ ನ್ನು ಪ್ರಶ್ನೆ ಮಾಡುವ ನೈತಿಕತೆಯನ್ನು ಅವರು ಎಂದೂ ಕಳೆದು ಕೊಂಡಿದ್ದಾರೆ . ನೀವು ಮಾಡದ ತಪ್ಪಿಗೆ, ನಿಮ್ಮನು ಶೊಲಕ್ಕೆರಿಸಲು ಇಲ್ಲ ಸಲ್ಲದ ಅರೂಪಗಳನ್ನು ಹುಟ್ಟು ಹಾಕಿದವೂ , ಅಂದೇ ನಿಮ್ಮನ್ನು ಪ್ರಶ್ನಿಸುವ ನೈತಿಕತೆಯನ್ನು ಕಳೆದು ಕೊಂಡಿದ್ದಾರೆ . ಅವರಿಟ್ಟ ಬೆಂಕಿಯಲ್ಲಿ ,ನೀವು ಅಗ್ನಿ ಪವೇಶ ಮಾಡಿ , ಇನ್ನು ಪ್ರಕಾಶ ಮಾನವಾಗಿ ಬೆಳಗುತ್ತಿರುವುದನ್ನು ಅವರುಗಳಿಗೆ ಅರಗಿಸಿ ಕೊಳ್ಳಲು ಆಗುತ್ತಿಲ್ಲ .
ಇನ್ನು ಈ ವಿಷಯದ ಬಗ್ಗೆ ವಿರೋಧ ಪಕ್ಷಗಳು ಧ್ವನಿ ಎತ್ತುವುದು ದೂರವೇ ಉಳಿಯಿತು . ಏಕೆಂದರೆ ಈ ಹಿರಿಯ ಜೀವವನ್ನು ವಹಿಸಿಕೊಂಡು ಮಾತನಾಡಿದರೆ ಯ್ಯಾವ ಓಟೂ ಗಿಟ್ಟುವುದಿಲ್ಲ . ಗುಂಡೇಟಿಗೆ ಒಬ್ಬ ಭಯೋತ್ಪಾದಕರು ಸತ್ತರೆ , ದೇಶಾದ್ಯಂತ ಬಾಯಿ ಬಡಿದು ಕೊಂಡಾಗ ಸಿಕ್ಕುವ ಓಟ್ ಬ್ಯಾಂಕ್ ಇದರಲ್ಲಿ ಇಲ್ಲ ಎಂದು ಇಲ್ಲರಿಗೆ ತಿಳಿದು ಜಾಣ ಕಿವುಡು /ಕುರುಡು ಪ್ರದಶಿಸುವುದು ಅವರಿಗೆ ಕರಗತ
ಇದು ನಿಮಗೆ ವಯಕ್ತಿಕ ವಿಚಾರ ಎಂದು ತಿಳಿದಿದ್ದರೂ, ನಿಮ್ಮಲಿ ಈ ವಿಚಾರ ಕೋರಿಕೊಳ್ಳುವ ಅಧಿಕಾರ ನಿಮ್ಮ ಅಭಿಮಾನಿಗಳಿಗೆ ಇದೆ ಎಂದುಕೊಂಡಿದ್ದೇವೆ . ರಾಮ ಮಂದಿರ ಕಟ್ಟುವುದು , ಸರ್ಕಾರದ ಜವಾಬ್ದಾರಿ ಅಲ್ಲದಿದ್ದರೂ , ಅದು ಭಾರತೀಯರ ಅಭಿಲಾಷೆ ಎಂದು ವಾಜಪೇಯಿ ಯವರು ಹೇಳಿ ದ ಹಾಗೆ, ನಿಮ್ಮ ಪತ್ನಿಯನ್ನು ನಿಮ್ಮಲ್ಲಿಗೆ ಮರಳುವುದು ಕೂಡ ಅಸಂಖ್ಯಾತ ಅಭಿಮಾನಿಗಳ ಹಾರೈಕೆ ಕೂಡ . ಯ್ಯಾವ ದೇಶಸೇವೆ ಉದ್ದೇಶ ನಿಮ್ಮನ್ನು ಬೇರ್ಪಡಿಸಿತ್ತೋ , ಅದೇ ದೇಶವಾಸಿಗಳ ಆಸೆ ನಿಮ್ಮನ್ನು ಒಂದುಗೂಡಿಸಲಿ
ನಿಮ್ಮನು ಹತ್ತಿರದಿಂದ ಹಿಂಬಾಲಿಸುವ ಅಧಿಕಾರ ನಿಮ್ಮ ಪತ್ನಿಗೆ ಇದೆ. ಆ ಅಧಿಕಾರವನ್ನು ಅವರು ಇದುವರೆಗೂ ಚಲಾಯಿಸಿಲ್ಲ . ಅದು ಅವರ ಬಳಹಿನತೆ ಅಲ್ಲ. ಅದು ಅವರ ದೊಡ್ಡ ಗುಣ . ಭಾರತೀಯ ನಾರಿಯರ ಸಂಸ್ಕೃತಿ . ನಿಮ್ಮ ಅದಿಕೃತ ನಿವಾಸದ ಮೂಲೆ ಯಲ್ಲಿ ಇರುವ ಅವಕಾಶ ಮಾಡಿಕೊಟ್ಟರೆ ಸಾಕು. ಅದರಲ್ಲೇ ಅವರು ಸ್ವರ್ಗವನ್ನು ಕಂಡುಕೊಳ್ಳುತ್ತಾರೆ . ಅವರು ನಿಮ್ಮ ಕೆಲಸಗಳಿಗೆ , ನಿಮ್ಮ ರಾಜಕೀಯ ಚಟುವಟಿಕೆಗಳಿಗೆ ತಲೆ ತೂರಿಸುವತವರಲ್ಲ . ನಿಮ್ಮ ಮೇಲಿನ ಜನರ ಅಭಿಮಾನಕ್ಕೆ ಯ್ಯಾವುದೇ ದಕ್ಕೆ ಬರುವುದಿಲ್ಲ. ಬಾಗಿಲ ಮರೆಯಲ್ಲಿ ನಿಂತು ನಿಮ್ಮ ಯಶಶ್ ಕಣ್ಣು ತುಂಬಿಕೊಂಡು, ಮಾಡಿದ ತ್ಯಾಗ ಸಾರ್ಥಕ ವಾಯಿತು ಎಂದುಕೊಳ್ಳಲಿ . ಈ ವಿಚಾರದಲ್ಲಿ ನಿಮ್ಮ ಉದ್ದೇಶದ ಬಗ್ಗೆಯೂ ವಿರೋಧ ಪಕ್ಷಗಳೂ ಸಂಶಯ ಪಡುವುದಿಲ್ಲ .ಜಯಲಲಿತಾ, ಮಮತಾ ಅವರಿಗೆ ಇರುವಂತೆ , ನಿಮ್ಮ ಪತ್ನಿಯ ಹಿಂದೆ ಒಬ್ಬ ಎಂಪಿ ಅಥವಾ ಎಂ ಎಲ್ ಎ ಗಳು ಇಲ್ಲ. ಆದರೆ ಅವರ ಹಿಂದೆ ಆಸಂಖ್ಯಾತ ಸಜ್ಜನರ ಅನುಕಂಪ ಮತ್ತು ಅವರ ತ್ಯಾಗಕ್ಕೆ ಗೌರವ ಇದೆ
ನೀವು ಗಾಂಧಿ , ನೆಹರು ಮತ್ತು ಪಟೇಲರಂತಹ ನಾಯಕರ ಸಾಲಿನಲ್ಲಿ ನಿಲ್ಲುವಂಥ ದಿನಗಳು ದೂರವಿಲ್ಲ . ಅದರೆ ನೀವು ಗಾಂಧಿ ನೆಹರು ಅವರ ಹತ್ತಿರಕ್ಕಿಂತ , ಪಟೇಲರ ಹತ್ತಿರದಲ್ಲಿ ನಿಲ್ಲುವಿದು ಒಳ್ಳೆಯದು . ದೊಡ್ಡ ಮನುಷ್ಯರ ಪತ್ನಿಯರಾಗುವುದು ದೊಡ್ಡ ಶಾಪ ಎಂದು ಭಾರತೀಯ ಹೆಣ್ಣು ಮಕ್ಕಳು ಭಾವಿಸಬಾರದು . ರಾಮ ,ಗೌತಮ ಬುದ್ದ ಮಾಡಿದ ತಪ್ಪು ಮರುಕಳಿಸದಿರಲಿ . ತ್ಯಾಗದ ಉದ್ದೇಶ ಈಡೇರಿದ ಮೇಲೂ , ತ್ಯಾಗದ ನಿರ್ಧಾರಕ್ಕೆ ಅಂಟಿ ಕೊಳ್ಳುವುದರಲ್ಲಿ ಪುರುಷಾರ್ಥವಿಲ್ಲ . ಅದರಿಂದ ಯ್ಯಾರಿಗೂ ಪ್ರಯೋಜನವಿಲ್ಲ ಕಾಲಾಂತರ ವಾದಾಗ , ಸತ್ತ ಜೀವದ ಮೇಲೆ ವೃತ್ತಾ ಕಾರದ ಹೂಗುಚ್ಚವಿಟ್ಟರೆ , ಸತ್ತವರ ನೋವು ಶೂನ್ಯ ವಾಗುವುದಿಲ್ಲ . ಅವರು ಬದುಕಿರುವಾಗಲೇ ಅವರ ಖ್ರುಣ ವನ್ನು ತೀರಿಸಿಬಿಡಿ . ಖಟಿನ ನಿರ್ಧಾರಗಳನ್ನು ತೆಗೆದು ಕೊಳ್ಳುವುದು ನಿಮಗೆ ಕಷ್ಟವೆನೆಲ್ಲ . ದೀಪದ ಕೆಳಗೆ ಕತ್ತಲು ಇರದಿರಲಿ
ನಿಮ್ಮ ಅಭಿಮಾನಿ ಮತ್ತು ಹಿತೈಷಿ

 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ