ಶುಕ್ರವಾರ, ಜುಲೈ 27, 2012

ಸತ್ಯಮೇವ ಜಯತೆ (ಕಾದಂಬರಿ )-1

                                                                          ಮುನ್ನುಡಿ 

ರೋಗಿಗಳ ಸೇವೆಗಾಗಿ  ವೈದ್ಯರಾಗ ಬಯಸುವ ಕಾಲ ಎಂದೂ ಮುಗಿಯಿತು .ಈಗಿನ ವಿದ್ಯಾರ್ಥಿಗಳು ಸಮಾಜ ಸೇವೆಗೊಸ್ಕರ ವೈದ್ಯ ವೃತ್ತಿ ಆರಿಸಿಕೊಳ್ಳು ತಿದ್ದೇವೆ ಎಂದು ಹೇಳಲು  ಒಂದು ಕ್ಷಣ ಯೋಚಿಸುತ್ತಾರೆ .ಅಕಸ್ಮಾತಾಗಿ ಹೇಳಿದರೂ ಕೇಳುಗರು ಸಂಶಯ ಪಡುತ್ತಾರೆ ಇಲ್ಲವೇ ಲೋಕಾನುಭವ ವಿಲ್ಲದ ಮಕ್ಕಳು ಎಂದು ನಿರ್ಲಕ್ಷ ಮಾಡುತ್ತಾರೆ .ಇಂದು ವೈದ್ಯಕೀಯ ಎಂಬುದು  ಎಲ್ಲ ವೃತ್ತಿಗಳಂತೆ ,ಒಂದು ವೃತ್ತಿ ಮಾತ್ರ .
'ವೈದ್ಯೋ ನಾರಯಣೋ  ಹರಿ' ಎಂದು ಈಗಿನ ರೋಗಿಗಳು ಭಾವಿಸುವುದಿಲ್ಲ .ವೈದ್ಯರು ಸಮಾಜ ಸೇವೆಗೆ ಮಾತ್ರ ಚಿಕಿಸ್ಥೆ ನೀಡುವುದಿಲ್ಲ .ಪರಸ್ಪರ ಅಪನoಬಿಕೆಗಳು ಇದ್ದರೂ ,ಪರಸ್ವರ ಅವಲಂಬನೆ ನಮ್ಮನ್ನು ಹಿಡಿದಿಟ್ಟು ಕೊಂಡಿದೆ .
ಇದಕ್ಕೆ ಒಂದೇ ಕಾರಣ ಇದೇ  ಎಂದು ಹೇಳುವುದಕ್ಕೆ ಕಷ್ಟ ಸಾದ್ಯ .ಇದರಲ್ಲಿ ವೈದ್ಯರೂ ,ರೋಗಿಗಳು ,ಸರ್ಕಾರಗಳು ಮತ್ತು ಉದ್ಯಮಿಗಳು ಸಿಂಹ ಪಾಲು ಕಾರಣರು .
ಪರಸ್ಪರ ಅಪನಂಬಿಕೆ ನಡುವೆ ಸಾಗುತ್ತಿರುವ ನಾವು-ನೀವು ,ಪ್ರೀತಿ -ದ್ವೇಷ ಗಳನ್ನೂ ಒಟ್ಟಿಗೆ ಸಲಹುತ್ತಿದ್ದೇವೆ ..ಯಾವುದನ್ನು ಪ್ರೀತಿಸಬೇಕು ,ಯಾವುದನ್ನೂ ಖಂಡಿಸಬೇಕು ಎಂದು ನಮಗೆ ಸುಲಬದಿ ತಿಳಿಯುವುದಿಲ್ಲ .ಯಾಕೆಂದರೆ ಸರಿತಪ್ಪುಗಳು ನೋಡುವನ ಮನಸ್ತಿತಿಯನ್ನು ಅವಲಂಬಿಸಿರುತ್ತದೆ .ನಮಗೆ ಸರಿ ಎನಿಸಿದ್ದು ,ಬೇರೆಯವರಿಗೆ ತಪ್ಪಿರಬಹುದು .ನಮಗೆ ತಪ್ಪಾಗಿ ಕಂಡಿದ್ದು ,ಸರಿಯಿರಬಹುದು .ಈ ದ್ವಂದ ಗಳು ವೈದ್ಯ ವೃತ್ತಿಗಳಲ್ಲಿ ಹೆಚ್ಚು ಕಾಣುವಂತ ದ್ದು .ಇಲ್ಲಿ ಎರಡು ಮತ್ತು ಎರಡು ಯಾವಾಗಲು ನಾಲ್ಕಗಿರುವುದಕ್ಕೆ ಸಾದ್ಯವಿಲ್ಲ.

ವೈದ್ಯಕೀಯ ವೃತ್ತಿಯನ್ನು ಒಂದು ಉದ್ಯಮವಾಗಿ ಪರಿಗಣಿಸಬಾರದು ,ಸೇವಾ ಮನೂ ಭಾವದಿಂದ ಕೆಲಸ ಮಾಡಬೇಕು ಎಂದು ಹೇಳುವುದು ಸುಲಭ.ಮಠಗಳೇ ಉದ್ಯಮವಾಗಿರು ಈ ಕಾಲದಲ್ಲಿ ,ಬಹಳಷ್ಟು ಬೆವರು ಸುರಿಸಿ ವೈದ್ಯರಾಗುವರನ್ನ, ಸನ್ಯಾಸಿಗಳಂತೆ ಜೀವನ ಮಾಡಲು ನಿರೀಕ್ಷಿಸುವುದು ಸಂಮಂಜಸವಲ್ಲ.ಲೌಕಿಕ  ಕೆಸರಿನ ಜಗತ್ತಿನಲ್ಲಿ ಕಮಲವಾಗಿ ವೈದ್ಯರು ಇರಬಹುದೇ ಎಂಬುದು ಯಕ್ಷ ಪ್ರಶ್ನೆ .ವೈದ್ಯ ರೋಗಿ ಗಳ ನಡುವಿನ ಸಂಬಂದವನ್ನ ಧನಾತ್ಮಕವಾಗಿ ಬೆಳಸದಿದ್ದರೆ ,ಅದು ಮನುಕುಲದ ದೊಡ್ಡ ದುರಂತ ಕಂದಕ ವಾಗುವುದರಲ್ಲಿ  ಸಂಶಯವಿಲ್ಲ  .


                                                                                                               ದಯಾನಂದ ಅಂಕಣ್ಣನದೊಡ್ಡಿ

                                                                     ಸೂಚನೆ
ಕತೆಯ ನೈಜತೆಗಾಗಿ ಕೆಲವೊಂದು ನಿಜ ವ್ಯಕ್ತಿ ಗಳ ಹೆಸರುಗಳನ್ನೂ ಬಳಸಿಕೊಳ್ಳಲಾಗಿದೆ . ಆದರೆ ಈ  ಕಾದಂಬರಿಯಲ್ಲಿ ಬರುವ ಎಲ್ಲ ಪಾತ್ರಗಳು ಕಾಲ್ಪನಿಕ .ಈ ಕಾದಂಬರಿಯ ಪಾತ್ರಗಳಿಗೂ ,ನಿಜ ವ್ಯಕ್ತಿಗಳಿಗೂ ಸಾಮ್ಯ ವಿದ್ದರೆ ಅದು ಕಾಕತಾಳಿಯ ಮಾತ್ರ. ಯಾರ ಮನಸ್ಸಿಗೂ ನೋವುಂಟು ಮಾಡುವುದು ಲೇಖಕರ ಉದ್ದೇಶವಲ್ಲ.
                                                                                                                       (ಮುಂದುವರೆಯುವುದು )





3 ಕಾಮೆಂಟ್‌ಗಳು:

  1. Huge task ahead!
    Word of caution to begin with!!
    I have gone astray and dropped idea of writing big, as original concepts and ideas get diluted after some pages; as if you are getting carried away.
    Only after that, I have developed enormous regard for writers like SLB, who can stick to the concept and narrate so well for hundreds of pages.

    Good luck and best wishes. Nimma lekhani mattu khadga - eradoo niraayaasavaagi hariyali! (pun intended!!)

    Kiran

    ಪ್ರತ್ಯುತ್ತರಅಳಿಸಿ
  2. we are waiting for contination. i can smell the deep influence of bhairappa if i am not wrong . its coming out very good

    ಪ್ರತ್ಯುತ್ತರಅಳಿಸಿ